ಪರಮಹಂಸ

ಏನಿದೀ ಜಿಗಿದಾಟ
ಕಿವಿಹರಿವ ಕೂಗಾಟ
ಇದುವರೆಗು ಕೇಳರಿಯದೀ ಆರ್ಭಟ?
ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ
ಇವನಾಡುವಾಟ!
ಅವರಿವರ ನಾಲಗೆಯ ಕಿತ್ತು
ತಲೆಯೊಳು ನೆಟ್ಟು
ಬೆಳೆಸಿಹನು ಇವನೊಂದು ಭಾರಿ ಮಂಡೆ.
ರಮಣ ಅರವಿಂದ ನುಡಿಯುವರು ಬುರುಡೆಯೊಳಿಂದ
ಅವರು ಹೊರಜಿಗಿಯೆ ಇದು ಖಾಲಿಹಂಡೆ!

ಯಾರದೋ ಗದ್ದೆಯಲಿ ನಿನ್ನ ದನ ಮೇಯಿಸುವುದಿನ್ನು ಸಾಕು;
ಕಂಡಕಂಡವರೆಲ್ಲ ತುಡುಗುದನ ಎಂದೊಯ್ದು
ದೊಡ್ಡಿಗಟ್ಟುವ ರಂಪ ಏಕೆ ಬೇಕು?
ಇರುವೆರಡು ಪುಡಿಕಾಸ
ನಾಲ್ಕು ಅಡಿ ನೆಲಕೊಳಲು ಹಾಕು,
ಆದ ಕೈಬಿಟ್ಟು
ನೆರೆಬೇಲಿ ತರಿದು
ನಾ ಸುರಭಿಕುಲಸ್ವಾಮಿಯೆನುವುದು ಬರಿ ಧಿಮಾಕು.

ಈಗೀಗ ನಡುಹರೆಯ,
ಮರ್ಮಸ್ಥಾನವ ಮೆಟ್ಟಿ ನಡೆದು ಬರುತಿದ್ದಾನೆ ನರ್ಮಸಚಿವ;
ಉತ್ಥಾನಪಾದರೆದೆ ಮೇಲೆಯೇ
ನಗುನಗುತ
ತುತ್ತುಗೊಳೆ ನಿಲುವಂಥ ಅಗ್ನಿಪಾದ.
ಸಪ್ತಸಾಗರದಡಿಯ ಪಾತಾಳದೊಡಲಲ್ಲಿ
ಅಬ್ಬರಿಸಿ ಒರಲುತಿರೆ ತೋಳ ಕರಡಿ, ಹೊರಗೆ
ಹಣೆಯ ಮಣೆಯಲಿ ಪರಮಹಂಸ ಪಾದದ ರಜವ
ಮೆರೆಸುವನು ‘ವೈರಾಗ್ಯ ಷಟ್ಕ’ ಹಾಡಿ.

ಅರಿವು ವರಿಸುವ ಮುಂಚೆ
ಗುರುಮಹಾರಾಜ ಪೀಠದ ಬಯಕೆ ಎದೆಯೊಳುರಿಯೆ,
ಕುಣಿದಾಡಿ ಬೊಬ್ಬಿಡಲು ಬಯಕೆ ಮುತ್ತಿದ ಜೀವ
ಮೌನದಲಿ ನಿಂತರಿವೆಗೆಣೆಯೆ?
ನಿನ್ನ ಪ್ರಾಣಕೆ ಪರಿಧಿಯೊಡ್ಡಿ ಸುತ್ತುತಲಿರಲು
ಈ ಮಣ್ಣ ನೂರು ಬಣ್ಣ,
ಅದ ಜಿಗಿದ ಮೇಲೆನ್ನು
‘ನನ್ನ ಸಾಧನೆಯ ಗುರಿ ಬ್ರಹ್ಮ, ಅದೆ ಅತ್ಮಕನ್ನ.’

ಸುಗ್ಗಿ ಬರೆ ಬೀಗಿ ಮಾಗಿಗೆ ಕೊರಗಿ ಬಳಲುವನು
ಈ ಪರಮಹಂಸ!
ಪಾಮರರು ಬನ್ನಿರೋ, ಅಡಿಯೊಳಿಡಿ ಹಣೆಯ
ಇವ ಅರವಿಂದರಂಶ!
ಎಲ್ಲೊ ಹುಟ್ಟಿದ ಗಿಡವನಿದರ ನಿಜಭೂಮಿಯೊಳು
ನೆಡಬಾರದೇನೊ ಭಗವಂತ?
ಬಿಸಿಲ ಹಣ್ಣಾಗದೆ ರಸತುಂಬಿ ಕಳಿವಂತೆ ಕೃಪೆಮಾಡೊ,
ಬದುಕಲೀ ಭ್ರಾಂತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಟುಂಬ ಯೋಜನೆ
Next post ನಾವು ಕಮಲದ ಹೂಗಳು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys